ಕರ್ನಾಟಕದ ಸಾವಯವ ಕೃಷಿ ಪಿತಾಮಹ ಎಂದೇ ಹೆಸರಾದ ಎಲ್.ನಾರಾಯಣ ರೆಡ್ಡಿ ಅವರ ಸಾವಯವ ಕೃಷಿ ವಿಚಾರಧಾರೆಯನ್ನು ಹೊತ್ತು ತರುವ ಪುಸ್ತಕ. ನಾರಾಯಣ ರೆಡ್ಡಿಯವರು ನಡೆಸಿಕೊಡುತ್ತಿದ್ದ ತರಬೇತಿ ಕಾರ್ಯಕ್ರಮಗಳು ಮತ್ತು ಹಲವಾರು ವೀಡಿಯೋಗಳನ್ನು ಪ್ರಶಾಂತ್ ಜಯರಾಂ ಅವರು ಭಟ್ಟಿಯಿಳಿಸಿ ಅಕ್ಷರ ರೂಪಕ್ಕೆ ತಂದಿದ್ದಾರೆ. ಅದನ್ನು ಪರಿಷ್ಕರಿಸಿ ಪುಸ್ತಕ ರೂಪ ಕೊಟ್ಟಿದ್ದಾರೆ ವಿ.ಗಾಯತ್ರಿ. 7 ಅಧ್ಯಾಯಗಳು, 2 ಅನುಬಂಧಗಳನ್ನು ಹೊಂದಿರುವ ಪುಸ್ತಕ ನಾರಾಯಣ ರೆಡ್ಡಿ ಮತ್ತು ಅವರ ಕೃಷಿಗೆ ಸಂಬಂಧಪಟ್ಟ ಅಪರೂಪದ ಚಿತ್ರಗಳ ಸಂಗ್ರಹವೂ ಆಗಿದೆ.
ಸುಸ್ಥಿರ ಕೃಷಿ ಪಾಠಗಳು
₹130.00Price