ಈ ನಾಡಿನ ಸಂಮೃದ್ಧ ಕೃಷಿಯನ್ನು ಕಟ್ಟಿದ ಧೀಮಂತ ಮಹಿಳೆಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಚಾಮರಾಜನಗರ ತಾಲೂಕು ಪಣ್ಯದ ಹುಂಡಿ ಗ್ರಾಮದ ಪುಟ್ಟೀರಮ್ಮ ಅವರ ಸಂದರ್ಶನ ಆಧಾರಿತ ಕೃತಿ. ಆ ಪ್ರದೇಶದ ಕೃಷಿಯ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಪುಟ್ಟೀರಮ್ಮ ಅವರ ಅಸಾಧಾರಣ ತಿಳುವಳಿಕೆ ಮತ್ತು ಸಮಷ್ಟಿ ಪ್ರಜ್ನೆ ಊಹೆಗೂ ನಿಲುಕದ್ದು. ಮಿಶ್ರ ಬೆಳೆ ಪದ್ಧತಿಗಳು, ಬಿತ್ತನೆ ಕ್ರಮ, ಬೀಜಗಳನ್ನು ಕಾಪಾಡುವ ವಿಧಾನಗಳು ಮತ್ತು ತಾವು ಕೊಯ್ಯುವ 100 ಬಗೆಯ ಬೆರೆಕೆ ಸೊಪ್ಪಿನ ವಿಸ್ಮಯ ಲೋಕವನ್ನು ಅನಾವರಣಗೊಳಿಸುವ ರೀತಿ ಅವರದ್ದೇ ಸ್ವಂತ ಧ್ವನಿಯಲ್ಲಿ ಮೂಡಿಬಂದಿದೆ. ಅದನ್ನು ಇಲ್ಲಿ ಓದಿಯೇ ಅನುಭವಿಸಬೇಕು.
ಪುಟ್ಟೀರಮ್ಮನ ಪುರಾಣ
₹100.00Price